ಎಲ್ಲಿ ಅಡಗಿದೆಯೇ

ಎಲ್ಲಿ ಅಡಗಿರುವೆ ಹೇಳೆ
ಕೋಗಿಲೆ ನಿನ್ನ ದನಿಯು
ಕೇಳಿ ಬರುತಿದೆ ||

ಯಾವ ರಾಗದ ಭಾವವೂ
ಯಾವ ತಾಳದ ವೇಗವೂ
ಯಾರ ಪ್ರೇಮದ ಪಲ್ಲವಿಯು
ತಿಳಿದಿಲ್ಲ ಎನಗೆ ಹೇಳೆ ಕೋಗಿಲೆ ||

ಎಷ್ಟು ದೂರವಿರುವೇ ನೀನು
ಯಾವ ಮರದಲ್ಲಡಗಿರುವೇ
ನಿನ್ನ ಪ್ರೇಮ ಪಲ್ಲವಿಗೆ
ಚರಣಗಳ ಸಾಲು ಬರೆಯುವೆ ||

ಹೂ ಗೊಂಚಲುಗಳ ನಡುವೆ
ಕುಳಿತು ಭ್ರಮರಗಳ ಸ್ಪರ್‍ಶ
ತಿಳಿದು ಪಲ್ಲವಿಯ ಸಾಲು
ಹಾಡಿದೇ ನೀನು ಕೋಗಿಲೆ ||

ಹೂವಿನ ಮನದಾಳದ ಮಾತನರಿತು
ಸಂತಸದಿಂ ನಲಿದು ಹಾಡಿದೆ ಏನು
ನಿನ್ನ ಹಾಡ ಕೇಳಿ ನೋವ ಮರೆತೆ
ಎಂಥಾ ಸೊಗಸು ರಾಗಲಾಪ ||

ರೆಂಬೆಕೊಂಬೆಗಳ ನಡುವೆ
ಕಟ್ಟಿದ ಗೂಡುಗಳ ಸಂಸಾರ
ನಿನ್ನ ನೋಡುತ ಹಿಗ್ಗಿ ರೆಕ್ಕೆಗಳ
ಬಡಿದು ಯಾವ ತಾಯ್ ಹಕ್ಕಿಯ ಕರುಳು
ಎಂದು ಕೇಳುತಿದೆ ||

ನಿನ್ನ ಅರಿವಾಗದ ರೀತಿನೀತಿ
ದೇವನಿರಿಸಿದ ಕಂಠವೂ
ನಿನ್ನ ಮೈಬಣ್ಣ ಕಪ್ಪಾದರೂ
ಮನವು ಕಾವ್ಯವದೂ ಕೋಗಿಲೆ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀವಂತ ಜ್ವಾಲಾಮುಖಿ ಅಥವಾ ಹಳ್ಳಿಯ ಸೊಸ್ತ್ಯಾರು
Next post ಹೆಣ್ಣು

ಸಣ್ಣ ಕತೆ

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

cheap jordans|wholesale air max|wholesale jordans|wholesale jewelry|wholesale jerseys